Saturday, November 1, 2008

ಮಾನವ

ಓ ಭುವಿಯ ಮಾನವ ನೀನಾಗುತಿರುವೆ ಅತಲದ ದಾನವ
ನೀ ಮಾಡುವ ಕಾರ್ಯವ ದೇವರಲ್ಲಿ ಬರೆಯುವ
ಆ ವಿಧಿಯು ಬರೆದ ಬರೆಹವ ನೀನಿಲ್ಲಿ ಅಲೆಸುವೆ
ನೀ ಮಾಡಿದ ಪಾಪವ ನಾನಿಲ್ಲಿ ಬರೆಯುವೆ

ಸೃಷ್ಟಿಸಿದ ಸೃಷ್ಟಿಗೆ ಎರಡು ಬಗೆದ ದ್ರೋಹಿಯೇ
ಜನ್ಮಕೊಟ್ಟ ಜನನಿಯ ರಕ್ಷಿಸದ ಪಾಪಿಯೇ
ಪೋಷಿಸಿದ ದೇಶವ ಮರೆತ ದೇಶದ್ರೋಹಿಯೇ
ನಿನ್ನಂತರಾತ್ಮಕೆ ಮೋಸಮಾಡಿದ ಅಧಮಿಯೇ

ಪ್ರತಿಷ್ಠೆಗಾಗಿ ಕಟ್ಟಿದೆ ಗಗನಚುಂಬಿ ಕಟ್ಟಡಗಳನು
ಧರ್ಮಕ್ಕಾಗಿ ಹೊಂದಿದೆ ಹೇಡಿತನದ ಸಾವನು
ಹಣಕ್ಕಾಗಿ ಮಾರಿದೆ ನಿನ್ನದಾದ ನಿನ್ನತನವನು
ಶಾಂತಿಗಾಗಿ ಹೋರಾಡಿ ಉಳಿಸಿಕೊ ಮಾನವೀಯತೆಯನು

ಅಜ್ಞಾನದಿಂದ ವಿಜ್ಞಾನಿ ಕಂಡುಹಿಡಿದ ವಿನಾಶದ ವಸ್ತುವನ್ನು
ಅಹಂಕಾರದಿಂದ ಉಗ್ರಗಾಮಿ ಮಾಡಿದ ಅಮಾಯಕರ ನಾಶವನು
ಸೇಡಿನಿಂದ ಬೆಂಕಿಯುಗುಲಿ, ಹಾಕಿದ ಅಶಾಂತಿಯ ಹಾರವನು
ಮೂರ್ಖರ ಯುದ್ಧದಲಿ ಕೊಟ್ಯಾರು ಮುಗ್ಧರು ಅಪ್ಪಿದರು ಸಾವನು

ಸೂರ್ಯನ ಕಿರಣಗಳನು ಕಂಡು ನಡುಗುತಿದೆ ಭುವಿಯು
ಭೂತಾಯಿಯ ಕಂಡು ನಗುತಿವೆ ಅನ್ಯ ಗ್ರಹಗಳು
ಚಂದ್ರನ ಸುಂದರತೆಯ ಕಂಡು ಮೂಗುಮುರಿಯುತಿದೆ ಭುವಿಯು
ಓ ಮಾನವ ಉಳಿಸು ನಿನ್ನ ಭೂತಾಯಿಯ ಮಾನವನು

ಹಕ್ಕಿಯು ಹಾರುತಿದೆ ಸೃಷ್ಟಿಯ ಸೋಬಗಿನಲಿ
ದುಂಬಿಯು ಅಲೆಯುತಿದೆ ಸವಿಜೇನಿನ ಸ್ಮರಣೆಯಲಿ
ಮೇಘಗಳು ಅಪ್ಪುತಿವೆ ಏಕತೆಯ ಆನಂದದಲಿ
ಮಾನವನು ಬದುಕುತಿರುವನು ಆಸೆಯೆಂಬ ವಿಷದಲಿ

ಏರುತಿಹನು ಮಾನವ ಸೃಷ್ಟಿಯ ಅಗೋಚರ ಮೆಟ್ಟಿಲನು
ಪೂಜಿಸುತಿಹನು ಮಾನವ ಸೃಷ್ಟಿಯ ಅಗೋಚರ ಶಕ್ತಿಯನು
ಬದುಕುತಿಹನು ಮಾನವ ಸೃಷ್ಟಿಯ ಆಶ್ರಯದಲಿ
ನಶಿಸುವನು ಮಾನವ ಸೃಷ್ಟಿಯ ಚರಣದಲಿ

No comments: