Wednesday, November 12, 2008

ಭಯೋತ್ಪಾದನೆ

ಜಗವು ಬದುಕುತಿರುವುದು ಭಯೋತ್ಪಾದನೆ ನೆರಳಲಿ
ಬದುಕು ವ್ಯರ್ಥವಾಗಿದೆ ಜಾತಿಮತಗಳ ಸಮರದಲಿ
ಮೊಗವು ಮುದುಡಿಕೊಂಡಿದೆ ಹೆಣಗಳ ರಾಶಿಯಲಿ
ಸೃಷ್ಟಿಕರ್ತನ ಸೃಷ್ಟಿಯು ನಶಿಸುತಿದೆ ಅಶಾಂತಿಯಲಿ

ಹುಟ್ಟಿದನು ಮಾನವ ಚಂಚಲ ಮಂಗನಾಗಿ
ಬೆಳೆದನು ಮಾನವ ಶರವೇಗದ ಬಾಣವಾಗಿ
ಹೊಂದಿದನಂತ್ಯವ ಭಯೋತ್ಪಾದನೆಗೆ ಶರಣನಾಗಿ
ಸಾಧಿಸಿದನು ಶೂನ್ಯವ ತಾ ಹುಟ್ಟಿದ ಸಾರ್ಥಕವಾಗಿ

ಜಗತ್ತಿಗೆ ಶಾಂತಿ ಸಂದೇಶ್ ನೀಡಿದ ದೇಶವದಂದು
ಅಶಾಂತಿಯ ನೆಲೆಯಾಗಿ ರಾರಾಜಿಸುತಿದೆ ಇಂದು
ಶಾಂತಿಗಾಗಿ ಹೋರಾಡಿದವರು ನಿಂತಿಹರು ಮೂರ್ತಿಯಾಗಿ
ಹಾಕುತಿಹರು ಹೂಮಾಲೆಯನು ಶಾಂತಿಯ ನೆನಪಿಗಾಗಿ

ಮಾನವನ ಸಾಧನೆಗೆ ಮಾನವನೇ ಆಗಿಹನು ಬಲಿಪಶು
ಇದನೆಲ್ಲವ ಕಂಡು ನಗುತಲಿದೆ ಮುಗ್ಧ ಶಿಶು
ಆ ಮುಗ್ಧ ಶಿಶು ಕೂಡ ಮುಂದಾಗಲಿದೆ ಪಶು
ಧರೆಯಾಗಲಿದೆ ಮುಂದೊಂದು ದಿನ ವ್ಯರ್ಥ ಶಷು

ಅಂದು ಮಾಯವಾಗುತ್ತಿದ್ದವು ಚುಕ್ಕೆಗಳು ಕಪ್ಪು ಮೋಡಗಳಿಂದ
ಇಂದು ಮಾಯವಾಗಿವೆ ಚುಕ್ಕೆಗಳು ಬಿಳಿಯ ಮೋಡಗಳಿಂದ
ಮುಂದೆ ಮಾಯವಾಗಳಿವೆ ಚುಕ್ಕೆಗಳು ಯುದ್ಧ ಮೋಡಗಳಿಂದ
ಒಂದು ದಿನ ಮಾನವನೆ ಮಾಯವಾಗುವನು ಮಾನವನಿಂದ

ಮಿನುಗುತಿದೆ ಚುಕ್ಕೆಯು ಚಂಚಲ ಮನದ ಮೂಲೆಯಲಿ
ಬೆಳೆಯುತಿದೆ ಚುಕ್ಕೆಯು ಅಶಾಂತಿಯ ಕ್ರೂರ ಸಮಾಜದಲಿ
ಮೂಡುತಿದೆ ದ್ವೇಷ ಸರ್ವಸುಂದರ ಅಂತರಾತ್ಮದಲಿ
ಸಿಡಿಯುತಿದೆ ಕಿಚ್ಚು ಮಿನುಗುಚುಕ್ಕೆಯ ಶುಭ್ರ ಬೇರಿನಲಿ

ಜ್ಞಾನವಾಗುತಿದೆ ಜನರಿಗೆ ವಿನಾಶದ ಬಾಣ
ಅಜ್ಞಾನದ ತುತ್ತತುದಿಗೆರಿದೆ ಮಾನವನ ಮನ
ಮಾನವನ ಅಂತರಾತ್ಮವನಾವರಿಸಿದೆ ಭಯದ ಮಸಣ
ಭಯೋತ್ಪಾದನೆ ತೊಲಗಿಸುತಿದೆ ಮಾನವನ ಮಾನ

No comments: